Saturday, May 19, 2012

IT Dept rocks in Srishti!


ಪ್ರೌಢದೆವರಾಯ ತಾಂತ್ರಿಕ ಮಹಾವಿದ್ಯಾಲಯ , ಹೊಸಪೇಟೆ.
ಹೊಸಪೇಟೆ.
ಡಿ. ೧೯ ಮೇ ೨೦೧೨
ಮಂಗಳೂರಿನಲ್ಲಿ ಜರುಗಿದ ಸೃಷ್ಟಿ-೨೦೧೨ ರಾಜ್ಯ ಮಟ್ಟದ ಪ್ರಾಜೆಕ್ಟ್ ಪ್ರದರ್ಶನದ ಇನ್ಸ್ಟ್ರುಮೆಂಟೇಶನ್ ವಿಭಾಗದಲ್ಲಿ  ಸ್ಥಳೀಯ ಪ್ರೌಢದೆವರಾಯ ತಾಂತ್ರಿಕ ಮಹಾವಿದ್ಯಾಲಯವು ಪ್ರಥಮ, ದ್ವಿತೀಯ ಹಾಗೂ ತೃತೀಯ ಎಲ್ಲ ಪ್ರಶಸ್ತಿಗಳನ್ನು  ತನ್ನದಾಗಿಸಿಕೊಳ್ಳುವ ಮೂಲಕ ದಾಖಲೆ ಮಾಡಿದೆ.
‘ವೈರ್ ಲೆಸ್ ಮೂಲಕ ನಗರ ನೀರು ಸರಬರಾಜು ವ್ಯವಸ್ಥೆ’ ಪ್ರಾಜೆಕ್ಟ್ ಗೆ ವಿದ್ಯಾರ್ಥಿ ರಾಜಶೇಖರ ಮತ್ತು ತಂಡ ಪ್ರಥಮ ಪ್ರಶಸ್ತಿ ಪಡೆಯಿತು. ‘ಪಿ.ಎಲ್.ಸಿ. ಬಳಕೆಯಿಂದ ರೋಬೊಟ್ ನಿಯಂತ್ರಣ’ ಪ್ರಾಜೆಕ್ಟ್ ಗೆ ವಿದ್ಯಾರ್ಥಿ ಹಾಲಪ್ಪ ಮತ್ತು ತಂಡ ದ್ವಿತೀಯ ಪ್ರಶಸ್ತಿ ಪಡೆಯಿತು. ‘ಸಂಜ್ಞೆ ಭಾಷೆಯ ತರಬೇತಿ ಯಂತ್ರ’ ಪ್ರಾಜೆಕ್ಟ್ ಗೆ ವಿದ್ಯಾರ್ಥಿ ಕೆ. ಮನೋಜ್ ಮತ್ತು ತಂಡ ದ್ವಿತೀಯ ಪ್ರಶಸ್ತಿ ಪಡೆಯಿತು.
ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ೩ ದಿನಗಳ ಈ ಮೇಳವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿತ್ತು. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಸಿದ್ದಯ್ಯ ಬಹುಮಾನ ವಿತರಿಸಿದರು. ಮುಖ್ಯಮಂತ್ರಿ ಸದಾನಂದ ಗೌಡ ಈ ಮೇಳವನ್ನು ಉಧ್ಘಾಟಿಸಿದರು.
ರಾಜ್ಯದ ೧೦೦ ಕ್ಕೂ ಹೆಚ್ಚು ಕಾಲೇಜುಗಳ ಸುಮಾರು ೭೦೦ ಪ್ರಾಜೆಕ್ಟ ಗಳು ಈ ಮೇಳದಲ್ಲಿ ಭಾಗವಹಿಸಿದ್ದವು.
ಈ ಅಭೂತಪೂರ್ವ ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಲಿ ಅಧ್ಯಕ್ಷ ಶ್ರೀ ಅರವಿ ಬಸವನ ಗೌಡ ಮತ್ತು ಪ್ರಾಚಾರ್ಯ ಡಾ. ಪಿ.ಖಗೆಶನ್ ಬಹಮನ ವಿಜೇತ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಕ ಅಧ್ಯಾಪಕರನ್ನು ಅಭಿನಂದಿಸಿದ್ದಾರೆ.