Thursday, August 9, 2012

ಕೃಷಿ ಸಚಿವರಾಗಿದ್ದ ಹೊಸಪೇಟೆಯ ಡಾ.ನಾಗನಗೌಡರು

ಹೊಸಪೇಟೆಯ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ
'ಮರೆಯಲಾಗದ ಮಹಾನುಭಾವರು' ಕಾರ್ಯಕ್ರಮ
ಡಾ.ನಾಗನಗೌಡರು




* ಡಾ.ಆರ್. ನಾಗನಗೌಡರು 1924-1925ರ ಸುಮಾರಿಗೆ ಅಮೆರಿಕ ವಿಶ್ವವಿದ್ಯಾನಿಲಯವೊಂದರಲ್ಲಿ ಕೃಷಿ ವಿಜ್ಞಾನದಲ್ಲಿ ಉನ್ನತ ಪದವಿ, ಡಾಕ್ಟರೇಟ್ ಪಡೆದರು.
*ಕೆಂಗಲ್ ಹನುಮಂತಯ್ಯನವರ ಮಂತ್ರಿಮಂಡಲದಲ್ಲಿ ಡಾ. ನಾಗನಗೌಡರು ಕೆಲವು ಕಾಲ ಕೃಷಿ ಸಚಿವರಾಗಿದ್ದರು. ರೈತ ಸಂಘ ಸಂಘಟಿಸಿ ರೈತರ ಪರ ಹೋರಾಡಿದರು.
*ಬಳ್ಳಾರಿ ಪ್ರಾಂತದಲ್ಲಿ ವ್ಯಾಪಕವಾಗಿ ಬೆಳೆಯುವ, ಬಿರು ಬಿಸಿಲಲ್ಲೂ ಹಸಿರಾಗಿರುವ 'ಬಳ್ಳಾರಿ ಜಾಲಿ' ಎಂದೇ ಖ್ಯಾತವಾಗಿರುವ ಜಾಲಿ ಗಿಡ (Prosopis juliflora)ವನ್ನು ಆಫ್ರಿಕಾಕದಿಂದ ತಂದು ಈ ನಾಡಿಗೆ ಪರಿಚಯಿಸಿದ್ದು ಡಾ.ಆರ್. ನಾಗನಗೌಡರು ಎಂದೂ ಹೇಳಲಾಗುತ್ತದೆ. ಮಣ್ಣಿನ ಸವೆತ ತಡೆಗಟ್ಟುವ, ಬಡವರಿಗೆ ಉರುವಲಾಗಿ ಉಪಯುಕ್ತವಾಗಿರುವ, ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಜಾಲಿ ಗಿಡ ಈ ಭಾಗಕ್ಕೆ ವರದಾನವಾಗಿದೆ.


Prosopis juliflora
*ಹೊಸಪೇಟೆ/ವಿಜಯನಗರ ಕ್ಷೇತ್ರದಿಂದ ಸಚಿವರಾದ ಪ್ರಥಮ ಜನ ಪ್ರತಿನಿಧಿ. ಅವರ ನಂತರ ಸುಮಾರು 60 ವರ್ಷಗಳ ನಂತರ ಆನಂದ್ ಸಿಂಗ್ 2012ರಲ್ಲಿ ಸಚಿವರಾದರು.
  

No comments:

Post a Comment